ಸರ್ಟಿಫೈಡ್ ಸ್ಕೀಮ್ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬುತ್ತಿರುವ ಪೇಯ್ಡ್ ಮೀಡಿಯಾ!

ಮಂಗಳೂರು: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಕೆಲವೊಂದು ಮಾಧ್ಯಮಗಳು ಯಾವುದೋ ಸ್ಕೀಮ್ ಸಂಸ್ಥೆಗಳ ವರದಿಗೆ ಇನ್ನು ಯಾವುದೋ ಸ್ಕೀಮ್ ಸಂಸ್ಥೆಗಳ ಪೋಸ್ಟರ್ ಹಾಗೂ ಪ್ರೋಮಟರುಗಳ ಪೋಟೊಗಳನ್ನು ದುರ್ಬಳಕೆ ಮಾಡುವುದು ಗಮನಕ್ಕೆ ಬಂದಿದ್ದು, ಆಯಾ ಸ್ಕೀಮ್ ಸಂಸ್ಥೆಗಳ ಮಾಲಕರು ಇದನ್ನು ತಳ್ಳಿ ಹಾಕಿದ್ದಾರೆ. ಕೆಲವೊಂದು ಪೇಯ್ಡ್ ಮಾಧ್ಯಮಗಳು ತಮ್ಮ ಲಾಭ ಹಾಗೂ ಟಿ‌ಆರ್‌ಪಿ ಆಸೆಗಾಗಿ ಕೆಲವೊಂದು ಸರ್ಟಿಫೈಡ್ ಸ್ಕೀಮ್ ಸಂಸ್ಥೆಗಳ ಬಗ್ಗೆ ಸುಳ್ಳು ವರದಿಯನ್ನು ಬಿತ್ತರಿಸುತ್ತಿದೆ ಇದರಿಂದ ಕೆಲವು ಗ್ರಾಹಕರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಕೆಲವು ಸ್ಕೀಮ್ ಸಂಸ್ಥೆಗಳು ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಕೆಲವು ಮಾಧ್ಯಮಗಳ ಸುಳ್ಳು ಸುದ್ದಿಯ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಲು ಹೊರಟಾಗ ನಾವು ವಿಷನ್ ಇಂಡಿಯಾ ಎಂಬ ಸಂಸ್ಥೆಯವರನ್ನು ಸಂಪರ್ಕಿಸಿದ್ದು, ಸಂಸ್ಥೆಯ ಮಾಲಕರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. “ನಾವು ಇದೇ ಮೊದಲ ಬಾರಿಗೆ ಸ್ಕೀಮ್ ಸಂಸ್ಥೆ ನಡೆಸುತ್ತಿಲ್ಲ. ಕಳೆದ ಒಂಬತ್ತು ವರ್ಷಗಳಿಂದ ಸಣ್ಣಪುಟ್ಟ ಸ್ಕೀಮ್‌ಗಳ ಮೂಲಕ ಈ ಮಟ್ಟಿಗೆ ಬೆಳೆದಿದ್ದೇವೆ. ನಮ್ಮ ಸಂಸ್ಥೆಯ ಮೂಲಕ ಹಲವಾರು ಬಡ ಜನರು ಮನೆ, ಕಾರು ಹಾಗೂ ಇನ್ನಿತರ ಗ್ರಹಪಾಯೋಗಿ ವಸ್ತುಗಳನ್ನು ಪಡೆದುಕೊಂಡಿದ್ದಾರೆ” ಎಂದರು. ಇದೇ ವೇಳೆ ವಿಷನ್ ಇಂಡಿಯಾ ಸಂಸ್ಥೆಯು ಸರ್ಕಾರದ ಪರವಾನಗಿ ಪಡೆದಿದ್ದು ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೂಡ ನಮಗೆ ನೀಡಿದ್ದಾರೆ.

ಮಾಧ್ಯಮಗಳು ಈ ಹಿಂದೆಯೂ ಇಂತಹದ್ದೇ ಕುತಂತ್ರ ನಡೆಸಿದ್ದು, ಯಾವುದೂ ಸ್ಕೀಮ್ ಕಂಪನಿಯೊಂದು ನಡೆಸಿದ ಹಗರಣಕ್ಕೆ ವಿಷನ್ ಇಂಡಿಯಾ ಸಂಸ್ಥೆಯ ಹೆಸರನ್ನು ಹಾಕಿ ಸುದ್ದಿ ಮಾಡಿರುವುದು ಈ ಬಗ್ಗೆಯೂ ವಿವರಿದ್ದಾರೆ. ಗ್ರಾಹಕರು ಯಾವುದೇ ಕಾರಣಕ್ಕೂ ವಿಷನ್ ಇಂಡಿಯಾ ಸಂಸ್ಥೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ನಾವು ಹಲವಾರು ವರ್ಷಗಳಿಂದ ಇದ್ದೇವೆ ಭವಿಷ್ಯದಲ್ಲೂ‌ ಇನ್ನೂ ಉತ್ತಮ ಮಟ್ಟದಲ್ಲಿ ವ್ಯಾಪಾರವನ್ನು ನಡೆಸುತ್ತೇವೆ ಮತ್ತು ಸರ್ಕಾರದ ಎಲ್ಲಾ ನೀತಿ ನಿಯಮಗಳನ್ನು ಪಾಲಿಸುತ್ತಾ ಸಂಸ್ಥೆಯನ್ನು ನಡೆಸುತ್ತುದ್ದೇವೆ ಎಂದು ವಾರ್ತಾ ಪ್ರಸಾರಕ್ಕೆ ಮಾಹಿತಿಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here

ಇತ್ತೀಚಿನ ಪೋಸ್ಟ್

ನೌಫಲ್ ಎಫ್‌.ಎನ್ ಸಿಡಿಲಬ್ಬರದ ಬ್ಯಾಟಿಂಗ್: ಸಿಎಫ್‌ಎಮ್‌ ಹೀರೋಸ್ ಸೆಮಿಫೈನಲ್‌ ಆಸೆ ಜೀವಂತ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ...

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿತ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ...

ದಾಳಿಂಬೆ ಸೇವಿಸಿ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಿರಿ

ದಾಳಿಂಬೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್...

ಲಾಸ್ ಏಂಜಲೀಸ್‌ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು 12,000ಕ್ಕೂ ಅಧಿಕ ಕಟ್ಟಡಗಳು ಭಸ್ಮ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16...

ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

ಸುಳ್ಯ: ದ.ಕ ಜಿಲ್ಲೆಯ ಬೆಳ್ಳಾರೆ ಪೇಟೆಯಲ್ಲಿ ಮತ್ತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಹಾಸ...

ವಿಷಯಗಳು

ನೌಫಲ್ ಎಫ್‌.ಎನ್ ಸಿಡಿಲಬ್ಬರದ ಬ್ಯಾಟಿಂಗ್: ಸಿಎಫ್‌ಎಮ್‌ ಹೀರೋಸ್ ಸೆಮಿಫೈನಲ್‌ ಆಸೆ ಜೀವಂತ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ...

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿತ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ...

ದಾಳಿಂಬೆ ಸೇವಿಸಿ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಿರಿ

ದಾಳಿಂಬೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್...

ಲಾಸ್ ಏಂಜಲೀಸ್‌ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು 12,000ಕ್ಕೂ ಅಧಿಕ ಕಟ್ಟಡಗಳು ಭಸ್ಮ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16...

ಸಂಬಂಧಿತ ಲೇಖನಗಳು

ಜನಪ್ರಿಯ ಲೇಖನಗಳು

ಇತ್ತೀಚಿನ ಪೋಸ್ಟ್