ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘ ಇಂದು ಕಲ್ಯಾಣ ನಗರದಲ್ಲಿ ಶ್ರೀ ವೇಮನ ರೆಡ್ಡಿರವರ 612 ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು:

ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘ ಇಂದು ಕಲ್ಯಾಣ ನಗರದಲ್ಲಿ ಶ್ರೀ ವೇಮನ ರೆಡ್ಡಿರವರ 612 ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು:

 

ಬೆಂಗಳೂರು: ಸರ್ವ ಸಂಘ ಪರಿತ್ಯಾಗಿಯಾಗಿ ಲೋಕ ಕಲ್ಯಾಣದಲ್ಲಿ ಅಧ್ಯಾತ್ಮಿಕ ತತ್ವಗಳ ಭೋದನೆಗಳಿಂದ ಖ್ಯಾತಿ ಪಡೆದು ಸಮಾಜದಲ್ಲಿ ಆಧ್ಯಾತ್ಮಿಕ ಗುರುವಾದ ಶ್ರೀ ವೇಮನ ರೆಡ್ಡಿ ಯೋಗಿ ರವರ 612 ನೆ ಜನ್ಮ ದಿನಾಚರಣೆಯನ್ನು ಇಂದು ಬೆಳಿಗ್ಗೆ, ಕಲ್ಯಾಣ ನಗರದ 80 ಅಡಿ ರಸ್ತೆಯಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘ ಆಯೋಜನೆ ಮಾಡಿತ್ತು. ಸಾರಿಗೆ ಸಚಿವ ರಾಮಲಿಂಗರೆಡ್ಡಿರವರು ದೀಪ ಹಚ್ಚಿ ಶ್ರೀ ವೇಮನ ಯೋಗಿ ರವರಿಗೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು ಮತ್ತು ಇಂದಿನ ವಿಶೇಷತೆಗಾಗಿ ಕರ್ನಾಟಕ ಮೊದಲ ಮುಖ್ಯಮಂತ್ರಿಗಳಾದ ಶ್ರೀ ಕೆ ಸಿ ರೆಡ್ಡಿ ರವರ ಸ್ಮರಣಾರ್ಥವಾಗಿ ಔಟರ್ ರಿಂಗ್ ರಸ್ತೆಯನ್ನು ಶ್ರೀ ಕೆ.ಸಿ.ರೆಡ್ಡಿ ರಸ್ತೆ ಎಂದು ಹೊಸದಾಗಿ ನಾಮಕರಣ ಮಾಡಲಾಯಿತು. ಕಾಯಕ್ರಮದಲ್ಲಿ, ಸಂಘದ ಹೊಸ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ನಂತರ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರಿಗೆ, ಮಾಜಿ ರಾಜ್ಯ ಸಭಾ ಸದಸ್ಯರಾದ ಶ್ರೀ ಕೆ ಸಿ ರಾಮೂರ್ತಿರವರಿಗೆ, ಮಾಜಿ ಸಚಿವ ಮತ್ತು ಶಾಸಕರಾದ ಭೈರತಿ ಬಸವರಾಜ್ ರವರಿಗೆ, ಮಾಜಿ ಮಹಾ ಪೌರರಾದ ಶ್ರೀ ಮಂಜುನಾಥ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ರೀ ಪದ್ಮನಾಭ ರೆಡ್ಡಿ ಮತ್ತು ಗಣೇಶರೆಡ್ಡಿ, ಕೆ.ಸಿ. ರೆಡ್ಡಿ ರವರ ಕುಟುಂಬದವರಿಗೆ ಹಾಗು ಕಾರ್ಯಕ್ರಮದ ಆಯೋಜಕರಾದ ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ರವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಚೇಲ್ಕೆರೆ ಬಾಗದ ಮುಖಂಡರಾದ ಶ್ರೀ ನಾಗರಾಜರೆಡ್ಡಿ, ಸಂಜಯ್ ರೆಡ್ಡಿ,ರಮೇಶ್ ರೆಡ್ಡಿ, ಮಾಜಿ ಬಿಡಿಎ ಸದಸ್ಯ ಜಗದೀಶರೆಡ್ಡಿ, ಬಾಣಸವಾಡಿ ಬಾಲಚಂದ್ರರೆಡ್ಡಿ,ಬಾಬು ರೆಡ್ಡಿ ಹಾಗು ನೂರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ಎಲ್ಲಾರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಯೋಗಿ ವೇಮನ ರೆಡ್ಡಿರವರ ಜನ್ಮದಿನವನ್ನು ನಗರದಲ್ಲಿ ಎಲ್ಲಾ ಭಾಗಗಲ್ಲಿ ಆಚರಿಸಲಾಯಿತು ಮತ್ತು ರವೀಂದ್ರ ಕಲಾಕ್ಷೆತ್ರದಲ್ಲಿ ಮುಖ್ಯ ಮಂತ್ರಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಿದರು.

 

LEAVE A REPLY

Please enter your comment!
Please enter your name here

ಇತ್ತೀಚಿನ ಪೋಸ್ಟ್

ನೌಫಲ್ ಎಫ್‌.ಎನ್ ಸಿಡಿಲಬ್ಬರದ ಬ್ಯಾಟಿಂಗ್: ಸಿಎಫ್‌ಎಮ್‌ ಹೀರೋಸ್ ಸೆಮಿಫೈನಲ್‌ ಆಸೆ ಜೀವಂತ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ...

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿತ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ...

ದಾಳಿಂಬೆ ಸೇವಿಸಿ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಿರಿ

ದಾಳಿಂಬೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್...

ಲಾಸ್ ಏಂಜಲೀಸ್‌ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು 12,000ಕ್ಕೂ ಅಧಿಕ ಕಟ್ಟಡಗಳು ಭಸ್ಮ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16...

ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

ಸುಳ್ಯ: ದ.ಕ ಜಿಲ್ಲೆಯ ಬೆಳ್ಳಾರೆ ಪೇಟೆಯಲ್ಲಿ ಮತ್ತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಹಾಸ...

ವಿಷಯಗಳು

ನೌಫಲ್ ಎಫ್‌.ಎನ್ ಸಿಡಿಲಬ್ಬರದ ಬ್ಯಾಟಿಂಗ್: ಸಿಎಫ್‌ಎಮ್‌ ಹೀರೋಸ್ ಸೆಮಿಫೈನಲ್‌ ಆಸೆ ಜೀವಂತ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ...

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿತ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ...

ದಾಳಿಂಬೆ ಸೇವಿಸಿ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಿರಿ

ದಾಳಿಂಬೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್...

ಲಾಸ್ ಏಂಜಲೀಸ್‌ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು 12,000ಕ್ಕೂ ಅಧಿಕ ಕಟ್ಟಡಗಳು ಭಸ್ಮ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16...

ಸಂಬಂಧಿತ ಲೇಖನಗಳು

ಜನಪ್ರಿಯ ಲೇಖನಗಳು

ಇತ್ತೀಚಿನ ಪೋಸ್ಟ್